ಅಡ್ಯನಡ್ಕ: ಅಗಲಿದ ಹಿರಿಯರಿಗೆ ನುಡಿನಮನ, ಶ್ರದ್ಧಾಂಜಲಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಜನವರಿ 13 , 2014
|
ಜನವರಿ 13, 2014
|
ಅಡ್ಯನಡ್ಕ: ಅಗಲಿದ ಹಿರಿಯರಿಗೆ ನುಡಿನಮನ, ಶ್ರದ್ಧಾಂಜಲಿ
ಅಡ್ಯನಡ್ಕ :
ಸೌಮ್ಯ ಪಾತ್ರಗಳು ಪೆರ್ಲ ಪಂಡಿತ ಕೃಷ್ಣ ಭಟ್ರ ಸ್ವಭಾವಕ್ಕೆ ಹೊಂದುವ ಪಾತ್ರಗಳು. ಇವರದು ಅಗಾಧವಾದ ಜಾnನ ಸಂಪತ್ತು, ನಿಬ್ಬೆರಗಾಗುವ ಉತ್ತರ ನೀಡುತ್ತಿದ್ದರು.
ಸುವ್ಯವಸ್ಥಿತವಾದ ಪಾಂಡಿತ್ಯ ಸಂಪಾದಿಸಿದವರು. ಶಬ್ದ ಪ್ರಯೋಗದ ಸಂಶಯಕ್ಕೆ ಇವರು ಆಕರ ಗ್ರಂಥದಂತಿದ್ದರು ಎಂದು ಡಾ| ಪ್ರಭಾಕರ ಜೋಶಿ ಮಂಗಳೂರು ನುಡಿದರು.
ಅವರು ಮೂಡಂಬೈಲು ಗೋಪಾಲಕೃಷ್ಣ ಶಾಸಿŒ ಸಾಂಸ್ಕೃತಿಕ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಮೂಡಂಬೈಲು ಶಾಲಾ ವಠಾರದಲ್ಲಿ ನಡೆದ ಅಗಲಿದ ಹಿರಿಯ ಚೇತನ ಪೆರ್ಲ ಕೃಷ್ಣ ಭಟ್ಟರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.
ವಾರಾಣಾಶಿ ಸುಬ್ರಾಯ ಭಟ್ಗೆ ನುಡಿನಮನ ಸಲ್ಲಿಸಿ ಮಾತನಾಡಿದ ಮೂಡಂಬೈಲು ಗೋಪಾಲಕೃಷ್ಣ ಶಾಸಿŒ, ಭಟ್ಟರು ಊರಿನ ನ್ಯಾಯ ತೀರ್ಮಾನಿಸುವ ನ್ಯಾಯಾಧೀಶರಾಗಿದ್ದರು. ಅಸಾಧಾರಣವಾದುದನ್ನು ಸಾಧಿಸಿದವರು. ಮೂಡಂಬೈಲು ಮತ್ತು ಅಡ್ಯನಡ್ಕದ ವಿದ್ಯಾಸಂಸ್ಥೆಗಳ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಅಡಿಕೆ ಕೃಷಿಕರ ಬೆನ್ನುಲುಬಾಗಿ ನಿಂತು ಅಡಿಕೆಗೆ ಹೊಸ ಮಾನ ಕಲ್ಪಿಸಿಕೊಟ್ಟ ಕ್ಯಾಂಪ್ಕೋ ಬ್ರಹ್ಮ ಎಂದರು.
ಈ ಸಂದರ್ಭದಲ್ಲಿ ಮೃತರೀರ್ವರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮೂಡಂಬೈಲು ಗೋಪಾಲಕೃಷ್ಣ ಶಾಸಿŒ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಡಾ| ಸಿ.ಕೆ. ಶಾಸಿŒ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಶಾಸಿŒ, ರಾಮಚಂದ್ರ ಶಾಸಿŒ, ಈಶ್ವರ ಭಟ್ ನಡುಮನೆ ಉಪಸ್ಥಿತರಿದ್ದರು. ಅನಂತರ ಯಕ್ಷಗಾನ ತಾಳಮದ್ದಳೆ 'ವಾಲಿ ಮೋಕ್ಷ' ಜರಗಿತು. ಭಾಗವತರಾಗಿ ಸತೀಶ ಶೆಟ್ಟಿ ಪಟ್ಲ ಮತ್ತು ಪುರುಷೋತ್ತಮ ಭಟ್, ಚೆಂಡೆಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತ ಮಜಲು, ರಾಮಪ್ರಸಾದ್ ವದ್ವ, ಮದ್ದಳೆ ಯಲ್ಲಿ ಪ್ರಶಾಂತ್ ಶೆಟ್ಟ ವಗೆನಾಡು ಭಾಗವಸಿದ್ದರು. ಅರ್ಥಧಾರಿಗಳಾಗಿ ಉಡುವೆಕೋಡಿ ಸುಬ್ಬಪ್ಪಯ್ಯ, ಡಾ| ಎಂ. ಪ್ರಭಾಕರ ಜೋಶಿ, ಮೂಡಂಬೈಲು ಗೋಪಾಲಕೃಷ್ಣ ಶಾಸಿŒ ಮತ್ತು ಹರೀಶ ಬಳೆಂತಿಮೊಗೆರು ಭಾಗವಹಿಸಿದ್ದರು.
ಕೃಪೆ :
http://kannada.yahoo.com
|
|
|